ಕೆರೆ ಮಂಜು Kere Manju
My blogs
Blogs I follow
| Gender | Male |
|---|---|
| Industry | Environment |
| Occupation | Journalist |
| Location | Bengaluru, Karnataka, India |
| Introduction | ಪತ್ರಕರ್ತ.... ನನ್ನ ತಾತ ನಂಜಪ್ಪ ಅರಳೆಪೇಟೆಯಲ್ಲಿ ನೆಲೆಸಿದ್ದಾಗ ಕೆರೆಗಳ ಬಗ್ಗೆ ಹೇಳುತ್ತಿದ್ದರು. ಆಗ ನನಗೆ ಇನ್ನೂ ಮೂರು-ನಾಲ್ಕು ವರ್ಷ. ನೆನಪಿನಾಳದ ಅವರ ಮಾತುಗಳಿಗೆ ನೀರೆರೆದವರು ಅಜ್ಜಿ ಪುಟ್ಟಬಸಮ್ಮ. 1980ರ ಸುಮಾರಿನಲ್ಲಿ ಅಜ್ಜಿಯೊಂದಿಗೆ ಬಿಟಿಎಸ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಅಲ್ನೋಡು ಕೆರೆ ಎಂದು ತೋರಿಸುತ್ತಿದ್ದ ನೆನಪು. ಆಗ ಕೆರೆಗಳ ಮಹತ್ವ ಗೊತ್ತಿರಲಿಲ್ಲ. ಅರಿಯುವ ಹೊತ್ತಿಗೆ ಕೆರೆಗಳು ನಿರ್ನಾಮವಾಗುತ್ತಿದ್ದವು. ರಾಜಾಜಿನಗರದ ಶಿವನಹಳ್ಳಿ, ಅಗ್ರಹಾರ ದಾಸರಹಳ್ಳಿ ಕೆರೆಗಳು ಹಂತಹಂತವಾಗಿ ಮಣ್ಣಾಗಿದ್ದನ್ನು ಶಾಲಾ ದಿನಗಳಲ್ಲಿ ಕಣ್ಣಾರೆ ಕಂಡಿದ್ದೇನೆ. ಜೀವಜಲವಾಗಿದ್ದ ಕೆರೆಗಳು ಇಂದು ಅಳಿವಿನ ಅಂಚಿನಲ್ಲಿವೆ. ಕೆರೆಗಳು ಉಳಿಯದಿದ್ದರೆ ಹಸಿರ ಪರಿಸರ ಉಳಿಯುವುದು ಕಷ್ಟಸಾಧ್ಯ. ಈಗ ಉಳಿದಿರುವ ಕೆರೆಗಳನ್ನು ಸಂರಕ್ಷಿಸಲು ಮುಂದಾಗದಿದ್ದರೆ ನಮ್ಮ ಮುಂದಿನ ಪೀಳಿಗೆಗೆ ಕೆರೆಗಳನ್ನು ಚಿತ್ರಪಟದಲ್ಲಿ ತೋರಿಸುವ ಕಾಲ ಬಂದೀತು. ಅದು ವಾಸ್ತವ ಆಗುವುದು ಬೇಡ. ಧರೆಯಲ್ಲಿ ಜೀವಜಲ ಬತ್ತದಿರಲಿ... ಕೆರೆಗಳ ವೈಭವ ಮರುಕಳಿಸಲಿ... ಕೆರೆ ಉಳಿಸಿ, ಇಲ್ಲವೇ ವಿನಾಶದ ಕರೆಗೆ ಸಿದ್ಧರಾಗಿ... |

