Blogger
Shivakumar Saya
On Blogger since: July 2018
Profile views: 1,460

My blogs

About me

GenderMale
IndustryPublishing
Occupationಕವಿ, ಸಾಹಿತಿ, ಅಧ್ಯಾಪಕರು ಹಾಗೂ ಜ್ಯೋತಿಷಿ. - Poet, writer, teacher and astrologer.
Locationಸಾಯ ಮನೆ, ಕುಡ್ಪಲ್ತಡ್ಕ ಅಂಚೆ, ಕರೋಪಾಡಿ ಗ್ರಾಮ, ಬಂಟ್ವಾಳ ತಾಲೂಕು, ದ. ಕ. - 574279 - Saya House, Kudpalthadka post, Karopady Village, Bantwal Taluk, D.K. PIN - 574279, Karnataka, India
Introduction'ಅಭಿಜಿತ್' ಎಂಬ ನನ್ನ ಜನ್ಮ ನಕ್ಷತ್ರದ ಹೆಸರನ್ನು ಬ್ಲಾಗ್‌ಗೆ ನೀಡಿರುತ್ತೇನೆ. 'ಅಭಿ' ಅಂದರೆ 'ಈಗ', 'ಜಿತ್' ಅಂದರೆ 'ಗೆದ್ದವನು', 'ಅಭಿಜಿತ್' ಅಂದರೆ 'ಈಗ ಗೆದ್ದವನು' ಎಂದು ಅರ್ಥ. ಇದು ಜ್ಯೋತಿಷ್ಯದಲ್ಲಿ ಬರುವ ವಿಶೇಷ ನಕ್ಷತ್ರ. - ಶಿವಕುಮಾರ್ ಸಾಯ Name 'Abhijit' given to this blog which is my birth star. In Sanskrit, 'Abhi' means 'now', 'Jith' means 'winner' and 'Abhijith'- means 'victorious or the one who cannot be defeated'. Abhijit Nakshatra is a special Nakshatra in Astrology. - Shivakumar Saya
Interestsಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಸಾಯ ಎಂಬ ಊರಿನವರಾದ ಶ್ರೀ ಶಿವಕುಮಾರ್ ಸಾಯ ಕವಿ, ಸಾಹಿತಿ, ಅಧ್ಯಾಪಕರು.ಕನ್ನಡ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಬಿ. ಎಡ್. ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗ, ನವದೆಹಲಿ ಇವರು ನಡೆಸುವ 'ಉಪನ್ಯಾಸಕರ ರಾಷ್ಟ್ರೀಯ ಅರ್ಹತಾ ಪರೀಕ್ಷೆ'ಯಲ್ಲಿ ಒಂದೇ ಪ್ರಯತ್ನದಲ್ಲಿ ಜೆಆರ್‌ಎಫ್ ರ್‍ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರ ನೂರಾರು ಕವಿತೆಗಳು ಹಾಗೂ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳು, ವಿಶೇಷ ಸಂಚಿಕೆಗಳು, ಸಂಪಾದನೆಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿ ಮತ್ತಿತರ ಮಾಧ್ಯಮಗಳಲ್ಲಿ ಬಿತ್ತರವಾಗಿವೆ. ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ, ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಹಲವಾರು ಬಹುಮಾನಗಳನ್ನು, ಪುರಸ್ಕಾರಗಳನ್ನು ಪಡೆದಿದ್ದಾರೆ. 'ತೆರೆದ ಅಧ್ಯಾಯ' ಎಂಬ ಒಂದು ಡಿಜಿಟಲ್ ಕವನ ಸಂಕಲನ ಮತ್ತು 'ನಗುವ ಹೂ' ಎಂಬ ಒಂದು ಮಕ್ಕಳ ಕವನ ಸಂಕಲನ ಪ್ರಕಟವಾಗಿದೆ. 'ಅಮೃತವಾಹಿನಿ' ಎಂಬ ಸಂಘಟನೆಯ ಅಧ್ಯಕ್ಷರಾಗಿ ಪ್ರತಿಭಾವಂತ ಯುವಜನರನ್ನು ಒಗ್ಗೂಡಿಸುವಲ್ಲಿ ಸಕ್ರಿಯವಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ, ವೇದಾಂಗ ಜ್ಯೋತಿಷ್ಯ ಕೇಂದ್ರವನ್ನು ಸ್ಥಾಪಿಸಿ ಆಪ್ತಸಲಹೆ, ಮಾರ್ಗದರ್ಶನ ನೀಡುತ್ತಿದ್ದಾರೆ. ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯ ಮತ್ತು ವಿದ್ಯಾಭಾರತಿ ಆಯೋಜಿಸಿದ ಶಿಬಿರಗಳಲ್ಲಿ ಸಾಹಿತ್ಯ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. 'ಹೊಸದಿಗಂತ' ರಾಷ್ಟ್ರೀಯ ದೈನಿಕದಲ್ಲಿ ಉಪಸಂಪಾದಕರಾಗಿ ವೃತ್ತಿ ಆರಂಭಿಸಿದ ಇವರು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದು, ಬಳಿಕ 2009ರಿಂದೀಚೆಗೆ ಅಡ್ಯನಡ್ಕದ ಜನತಾ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದಾರೆ. ಸ್ವತಂತ್ರ ಬ್ಲಾಗಿಂಗ್, ಸಾಮಾಜಿಕ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ ಮೂಲಕವೂ ಬರಹ, ಭಾಷಣ, ವ್ಯಾಖ್ಯಾನಗಳನ್ನು ಪ್ರಸ್ತುತಪಡಿಸುತ್ತಿರುವರು. ಆಯುಷ್ ಇಲಾಖೆಯ ಪ್ರಮಾಣಿಕೃತ ಯೋಗ ತರಬೇತುದಾರರಾಗಿಯೂ ನಿಯುಕ್ತರಾಗಿರುವುದು ಇವರ ಬಹುಮುಖ ಆಸಕ್ತಿಗೆ, ಅಧ್ಯಯನಶೀಲತೆಗೆ ಸಾಕ್ಷಿ. ಇವರು ಶಿಕ್ಷಕರು, ಸಾಹಿತಿ, ಕವಿ, ಜೊತೆಗೆ ಸಂಗೀತ - ಸಾಹಿತ್ಯ - ತತ್ತ್ವಶಾಸ್ತ್ರ- ವೇದ - ವಿಜ್ಞಾನದ ಜ್ಞಾನ ಉಳ್ಳವರು, ಅನ್ವೇಷಕ, ಪತ್ರಕರ್ತ, ಜ್ಯೋತಿರ್ವಿಜ್ಞಾನಿ ಹಾಗೂ ಮಾರ್ಗದರ್ಶಕರಾಗಿ ಎಲೆ ಮರೆಯ ಕಾಯಿಯಂತೆ ಸದ್ದಿಲ್ಲದ ಸಾಧಕರೆನಿಸಿದ್ದಾರೆ. ವಿಳಾಸ: ಶಿವಕುಮಾರ್ ಸಾಯ, 3-97, ಸಾಯ ಮನೆ, ಕುಡ್ಪಲ್ತಡ್ಕ ಅಂಚೆ, ಕರೋಪಾಡಿ ಗ್ರಾಮ, ಬಂಟ್ವಾಳ ತಾಲೂಕು, ದ. ಕ. ಪಿನ್ - 574279. ಬ್ಲಾಗ್: https://shivakumar-saya.blogspot.com ಯೂಟ್ಯೂಬ್: https://youtube.com/c/ShivakumarSaya ಫೇಸ್‌ಬುಕ್: https://facebook.com/shivakumar.saya1 ಇನ್‌ಸ್ಟಾಗ್ರಾಮ್: https://instagram.com/ShivakumarSaya
Google apps
Main menu